ಶ್ರೀ ರಾಮ ವಿದ್ಯಾಕೇಂದ್ರ

Sri Ram Nagar, Kodi ,Kundapura(T), Udupi(D) 576217

hero banner
hero banner
about banner

About Us

ಶ್ರೀ ರಾಮ ವಿದ್ಯಾಕೇಂದ್ರ

ಪ್ರಕೃತಿಯ ಸುಂದರ ಮಡಿಲಿನ ಕಡಲ ತೀರದ ತಪ್ಪಲಿನಲ್ಲಿ ಸುಂದರ ಕಲಿಕಾ ವಾತಾವರಣವಾಗಿರುವ ಶ್ರೀರಾಮ ನಗರ ಕೋಡಿ ಎಂಬಲ್ಲಿ ನಮ್ಮ ಶ್ರೀರಾಮ ವಿದ್ಯಾಕೇಂದ್ರವನ್ನು ನೋಡಬಹುದು . ಶ್ರೀರಾಮ ವಿದ್ಯಾಕೇಂದ್ರ ಎಂಬ ಸಂಸ್ಥೆ 2004 ರಲ್ಲಿ ಸ್ಥಾಪನೆಗೊಂಡಿದ್ದು , ಸಂಸ್ಕಾರಯುತ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ 28 ವಿದ್ಯಾರ್ಥಿಗಳಿಂದ ಪ್ರಾರಂಭವಾದ ನಮ್ಮ ಶ್ರೀರಾಮ ವಿದ್ಯಾಕೇಂದ್ರವು ಇದೀಗ 300ವಿದ್ಯಾರ್ಥಿಗಳನ್ನು ಒಳಗೊಂಡಿದೆ . ಪ್ರಸ್ತುತ ಸಾಲಿನಲ್ಲಿ ನಮ್ಮ ಶ್ರೀರಾಮ ವಿದ್ಯಾಕೇಂದ್ರವು ನರ್ಸರಿಯಿಂದ ಪ್ರಾರಂಭಗೊಂಡು ಪ್ರಾಥಮಿಕ , ಹಿರಿಯ ಪ್ರಾಥಮಿಕ ಮತ್ತು ಪ್ರೌಢವಿಭಾಗ (10 ನೇ) ತರಗತಿಯನ್ನು ಹೊಂದಿದೆ .




  • ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಶ್ರೀರಾಮ ವಿದ್ಯಾಕ್ರೇಂದ್ರವು ಉತ್ತಮ ಸೌಲಭ್ಯಗಳನ್ನು ಒಳಗೊಂಡಿದ್ದು, ಪ್ರತಿಯೊಂದು ವ್ಯವಸ್ಥೆಯು, ಕ್ರಮಬದ್ಧವಾಗಿರುವುದು ನೋಡಬಹುದು.


    ತರಗತಿಯ ಕೊಠಡಿ

  • ನಮ್ಮ ಶ್ರೀರಾಮ ವಿದ್ಯಾಕ್ರೇಂದ್ರ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆಯನ್ನುಹೊಂದಿರುವಂತ ತರಗತಿ ಕೊಠಡಿಯನ್ನು ಹೊಂದಿದೆ. ಬೋಧಕೇತರ ವರ್ಗದವರಿಗೂ ಮತ್ತು ವಿದ್ಯಾರ್ಥಿಗಳಿಗೂ ಆಹ್ಲಾದಕರ ವಾತಾವರಣವನ್ನು ಹೊಂದಿರುವಂತ ತರಗತಿ ಕೊಠಡಿಗಳನ್ನುನೋಡಬಹುದು.

  • ನೀರಿನ ವ್ಯವಸ್ಥೆ

  • ಕೈ ತೊಳೆಯಲು, ಕುಡಿಯಲು ಸುವ್ಯವಸ್ಥಿತವಾದ ನೀರಿನ ವ್ಯವಸ್ಥೆಯನ್ನುನೋಡಬಹುದು. ಶಾಲೆಯ ಆವರಣದ ಹೊರಾಂಗಣದಲ್ಲಿ ಸುರಕ್ಷಿತವಾಗಿ ಬಾವಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಯಾವುದೇ ರೀತಿಯಲ್ಲಿ ನೀರಿನ ವ್ಯವಸ್ಥೆಯಲ್ಲಿ ಅಡೆ-ತಡೆ ಇಲ್ಲದಂತೆ ಉತ್ತಮ ನೀರಿನ ವ್ಯವಸ್ಥೆಯನ್ನು ನೋಡಬಹುದು.

  • ಶೌಚಾಲಯ

  • ಗಂಡು ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೂ ಹಾಗೂ ಬೋಧಕೇತರ ವರ್ಗದವರಿಗೂ, ಬೇರೆ-ಬೇರೆಯಾಗಿರುವಂತ ಉತ್ತಮ ವ್ಯವಸ್ಥಿತವಾದಂತಹ ಶೌಚಾಲಯದ ವ್ಯವಸ್ಥೆಯನ್ನು ನೋಡಬಹುದು.

  • ಸಭಾಂಗಣ

  • ಉತ್ತಮ ರೀತಿಯ ಸುವಿಸ್ತಾರವಾಗಿರುವ ಸ್ಥಳವನ್ನು ಹೊಂದಿರುವಂತ ಸಭಾಂಗಣ ವ್ಯವಸ್ಥೆಯನ್ನು ಹೊಂದಿದ್ದು, ಬೆಳಗಿನ ಪ್ರಾರ್ಥನೆ, ಕೆಲವೊಂದು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ನಡೆಸಲು ಗಾಳಿ ಬೆಳಕಿನ ವ್ಯವಸ್ಥೆ ಇರುವ ಉತ್ತಮ ಸಭಾಂಗಣವನ್ನು ನೋಡಬಹುದು.

  • ಗ್ರಂಥಾಲಯ

  • ನಮ್ಮ ಶಾಲಾ ಗ್ರಂಥಾಲಯ ಕೊಠಡಿಯು ಉತ್ತಮವಾಗಿದ್ದು, ವಿದ್ಯಾರ್ಥಿಗಳಿಗನುಗುಣವಾಗಿರುವ ಜ್ಞಾನಾರ್ಜನೆಗೆ, ಉಪಯುಕ್ತವಾಗುವಂತಹ ಉತ್ತಮ ಪೌರಾಣಿಕ ಪುಸ್ತಕ, ವಿಜ್ಞಾನ ಮಾದರಿಯ ಪುಸ್ತಕ, ರಸಪ್ರಶ್ನೆ ಪುಸ್ತಕ, ಕಥೆ, ಕಾದಂಬರಿ, ವೀರಯೋಧರ ಪುಸ್ತಕ, ಸ್ವಾತಂತ್ಯ ಹೋರಾಟಗಾರರ ವ್ಯಕ್ತಿತ್ವ ವಿಕಸನ ಪುಸ್ತಕ, ಇನ್ನೂ ಹತ್ತು-ಹಲವು ಜ್ಞಾನವನ್ನು ವೃದ್ಧಿಸುವಂತಹ ಕಲಿಕೆಗೆ ಉತ್ತೇಜನ ನೀಡುವಂತಹ ಪುಸ್ತಕಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಗ್ರಂಥಾಲಯದಲ್ಲಿ ಶಿಸ್ತು ಕ್ರಮಬದ್ಧ ನಿಯಮವನ್ನು ಅನುಸರಿಸಲಾಗಿದೆ.

  • ಬಸ್ಸು ಸೌಲಭ್ಯಗಳು

  • ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಕ್ಷೇಮಾಭಿವೃದ್ದಿಯ ಸಲುವಾಗಿ, ಯಾವುದೇ ರೀತಿಯಲ್ಲಿ ಅಗತ್ಯಕ್ಕೆ ಮೀರದಿರುವಂತೆ ಹಾಗೂ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯನ್ನು ವಹಿಸುವಂತ ಡ್ರೈವರ್ಗಳ ನೇಮಕ ಮಾಡುವುದರ ಸಲುವಾಗಿ, ವಿದ್ಯಾರ್ಥಿಗಳನ್ನು ಕ್ಷೇಮವಾಗಿ, ಸುರಕ್ಷಿತವಾಗಿ ತಮ್ಮ ಮನೆ ತಲುಪಲು ಉತ್ತಮ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ.

  • ಆಟದ ಮೈದಾನ

  • ನಮ್ಮ ಶ್ರೀರಾಮ ವಿದ್ಯಾಕ್ರೇಂದ್ರ ಉತ್ತಮ ಆಟದ ಮೈದಾನವನ್ನು ಹೊಂದಿದೆ. ನರ್ಸರಿಯಿಂದ ಎಲ್.ಕೆ.ಜಿ, ಯು.ಕೆ.ಜಿ, ಒಂದನೇ, ಎರಡನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಜೋಕಾಲಿ, ಜಾರುಬಂಡಿ, ವ್ಯವಸ್ಥೆ ಇರುವಂತ ಉತ್ತಮ ಆಟದ ಮೈದಾನವನ್ನು ಹೊಂದಿದೆ. ಜೊತೆಗೆ ಪ್ರತಿಯೊಂದು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಆಟದ ಮೈದಾನವಿರುವುದರ ಜೊತೆಗೆ ತ್ರೋಬಾಲ್, ವಾಲಿಬಾಲ್, ಫುಟ್‌ಬಾಲ್ ರನ್ನಿಂಗ್ ರೇಸ್ ಹಾಗೂ ಹೊರಾಂಗಣ ಕ್ರೀಡೆಗಳನ್ನು ಆಡುವಂತಹ ಉತ್ತಮ ಆಟದ ಮೈದಾನವನ್ನು ನೋಡಬಹುದು.

  • ಭದ್ರತಾ ವ್ಯವಸ್ಥೆ

  • ನಮ್ಮ ಶಾಲೆಯ ಒಳಾಂಗಣ ಮತ್ತು ಹೊರಾಂಗಣ ಎಲ್ಲಾ ಕೊಠಡಿಯಲ್ಲಿಯೂ, ಆಟದ ಮೈದಾನದಲ್ಲಿಯೂ ಉತ್ತಮ ಕಣ್ಗಾವಲಾಗಿರುವ ಸಿ.ಸಿ.ಕ್ಯಾಮರದ ವ್ಯವಸ್ಥೆಯನ್ನು ಮಾಡಲಾಗಿದೆ.

  • about banner

    About Founder

    ಶ್ರೀಯುತ ನಾಗೇಶ್ ಕಾಮತ್‌

    ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುವ ನಮ್ಮ ಆಡಳಿತ ಸಂಚಾಲಕರಾದ ಶ್ರೀಯುತ ನಾಗೇಶ್ ಕಾಮತ್‌ರವರು ಎಂ.ಎ ಪದವಿಧರರಾಗಿದ್ದಾರೆ. ಹಿಂದಿ ವಿಷಯದಲ್ಲಿ ಎಂ.ಎಡ್ ಪದವಿಧರರಾಗಿರುವ ಇವರು ಅಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ ಮತ್ತು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಒಲವು ಹೊಂದಿರುವ ಇವರು ತಮ್ಮದೇ ಆದಂತಹ ಒಂದು ಶಾಲೆಯನ್ನು 2004 ರಲ್ಲಿ ಸ್ಥಾಪನೆ ಮಾಡಿದರು. ಸಂಸ್ಕಾರಯುತ ಮೌಲ್ಯಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿರುವ, ಇವರ ಶಾಲೆ 28 ಮಕ್ಕಳಿಂದ ಪ್ರಾರಂಭಗೊಂಡು ಪ್ರಸ್ತುತ 300 ಮಕ್ಕಳು ರಾರಾಜಿಸುವಂತ ಶಾಲೆಯಾಗಿ ಹೊರಹೊಮ್ಮಿದೆ. ಸಮಾಜ-ಸೇವೆಯಲ್ಲಿಯು ಕೂಡ ತಮ್ಮನ್ನು ತೊಡಗಿಸಿಕೊಂಡಿರುವಂತ ವ್ಯಕ್ತಿ ಅನೇಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದರ ಮೂಲಕ ಎಷ್ಟೋ ಮಕ್ಕಳಿಗೆ ದಾರಿ-ದೀಪವಾಗಿದ್ದಾರೆ. “ತುಂಬಿದ ಕೊಡ ತುಳುಕುವುದಿಲ್ಲ”ಎನ್ನುವಂತೆ, ಎಲ್ಲೂ ಕೂಡ ಪ್ರಚಾರದತ್ತ ನಿರೀಕ್ಷೆ ಇಡದ ಇವರು, ಕೇವಲ ಶಿಕ್ಷಣ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದಂತಹ ಸಹಾಯ ಹಸ್ತ ನೀಡುವುದರ ಮೂಲಕ “ಬಡವರ-ಬಂಧು” ಎಂದು ಕರೆಯಿಸಿಕೊಳ್ಳುವಂತ ವ್ಯಕ್ತಿತ್ವ ಇವರದ್ದು. ಇವರು ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತಮ್ಮದೇ ಆದಂತಹ ಹೆಸರನ್ನು ಮಾಡಿದ್ದಾರೆ. ಇವರ ಸಹಾಯ ಹಸ್ತ ಪಡೆದ ಎಷ್ಟೋ ಮನೆಗಳು ನೆಮ್ಮದಿಯ ಜೀವನ ನಡೆಸುದರ ಜೊತೆಗೆ ಅವರೆಲ್ಲರ ಮನ-ಮನೆಯಲ್ಲಿ ಹೆಸರಾಗಿರುವ ವ್ಯಕ್ತಿಯಾಗಿದ್ದಾರೆ. ಇವರ ಆಸೆ-ಆಸಕ್ತಿ ಮೂಲ ಉದ್ದೇಶ ತಮ್ಮ ಶ್ರೀರಾಮ ವಿದ್ಯಾಕೇಂದ್ರಕ್ಕೆ ಬರುವಂತಹ ಎಲ್ಲಾ ಮಕ್ಕಳ ಕಾಳಜಿ ಮತ್ತು ವಿದ್ಯಾರ್ಥಿಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಿ ಪ್ರತಿಯೊಂದು ಮಗುವು ಸರ್ವತೋಮುಖ ಬೆಳವಣೆಗೆ ಹೊಂದಬೇಕೆನ್ನುವುದೇ ಇವರ ಮನದಾಳದ ಆಸೆ.

    about banner

    About Founder

    ಶ್ರೀಯುತ ಜಿತೇಂದ್ರ

    ನಮ್ಮ ಎಲ್ಲಾ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಬೇಕೆಂದು ನಾವು ಬಯಸುತ್ತೇವೆ. ಅದನ್ನು ಸಾಧ್ಯವಾಗಿಸುವುದು ನಮ್ಮ ಕಾರ್ಯವಾಗಿದೆ ಮತ್ತು ಅದಕ್ಕೆ ವೇದಿಕೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಸಮೃದ್ಧಗೊಳಿಸುವ, ಮಕ್ಕಳ ಕೇಂದ್ರಿತ, ಸಮತೋಲಿತ ಮತ್ತು ರಚನಾತ್ಮಕ ಪಠ್ಯಕ್ರಮದ ವಿತರಣೆಯ ಮೂಲಕ ನಮ್ಮ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಯಶಸ್ಸನ್ನು ಖಾತ್ರಿಪಡಿಸಲಾಗಿದೆ ಮತ್ತು ವಿದ್ಯಾರ್ಥಿಗಳ ಸಾಧನೆಗಳ ಸಕಾರಾತ್ಮಕ ಗುರುತಿಸುವಿಕೆಯ ಮೇಲೆ ಕೇಂದ್ರೀಕರಿಸುವ ವಿದ್ಯಾರ್ಥಿ ಕಲ್ಯಾಣದ ಮೇಲೆ ಇಡೀ ಶಾಲೆ ಗಮನಹರಿಸುತ್ತದೆ.


  • ಹೇ ಹಂಸವಾಹಿನಿ ಜ್ಞಾನದಾಯಿನಿ ಅಂಬ ವಿಮಲಮತಿದೇ ಅಂಬ ವಿಮಲಮತಿ ದೇ । ಜಗಶಿರ ಮೋ‌ರ್ ಬನಾಯೇ ಭಾರತ ವಹಬಲ ವಿಕ್ರಮ ದೇ ಅಂಬ ವಿಮಲಮತಿದೇ ॥ಪ॥ ಸಾಹಸ ಶೀಲ ಹೃದಯ ಮೇ ಭರದೇ ಜೀವನ ತ್ಯಾಗ ತಪೋಮಯ ಕರದೇ । ಸಂಯಮ ಸತ್ಯ ಸ್ನೇಹಕಾ ವರದೇ ಸ್ವಾಭಿಮಾನ ಭರದೇ ಹೇ ಹಂಸವಾಹಿನೀ. ಲವಕುಶ ಧ್ರು ಪ್ರಹ್ಲಾದ ಬನೇ ಹಮ್ ಮಾನವತಾ ಕಾ ತ್ರಾಸ ಹರೇ ಹಮ್ । ಸೀತಾ ಸಾವಿತ್ರಿ, ದುರ್ಗಾ ಮಾ ಫಿರ್ ಘರ್ ಘರ್ ಭರ್‌ದೇ ಹೇ ಹಂಸವಾಹಿನೀ ॥2॥





  • ಬ್ರಹ್ಮಾರ್ಪಣಂ ಬ್ರಹ್ಮಹವಿರ್‌
    ಬ್ರಹ್ಮಗೌ ಬ್ರಹ್ಮಣಾ ಹುತುಮ್ ।
    ಬ್ರಹ್ಮವ ತೇನ ಗಂತವ್ಯಂ
    ಬ್ರಹ್ಮಕರ್ಮ ಸಮಾಧಿನಾ ॥
    ಓಂ ಸಹನಾವವತು । ಸಹನೌ ಭುನಕ್ತು ।
    ಸಹವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ।
    ಮಾ ವಿದ್ವಿಷಾವಹೈ |
    ಓಂ ಶಾಂತಿಃ ಶಾಂತಿಃ ಶಾಂತಿಃ


    • 300+

      Students

    • 50+

      Teachers & Staff

    • 100%

      Quality Education

    • 10+

      School Buses

    Sri rama Vidya Kendra

    WEBSITE CO-ORDINATORS